ಇದೊಂದು ಲಾಭರಹಿತ ಸಂಸ್ಥೆಯಾಗಿದೆ.ಇದನ್ನು ಭಾರತದ ಕ್ರೀಡಾರಂಗದ ದಂತಕಥೆಗಳಾದ ಗೀತಾ ಸೇಥ್ ಮತ್ತು ಪ್ರಕಾಶ್ ಪಡುಕೋಣೆಯವರು ಆರಂಭಿಸಿದರು.ಇದರ ಪ್ರಧಾನ ಕಛೇರಿ ಮುಂಬೈನಲ್ಲಿದೆ.ಇದರ ಮುಖ್ಯ ಉದ್ದೇಶವೇನೆಂದರೆ ಭಾರತದ ಅಥ್ಲೀಟ್ ಗಳಿಗೆ ಪದಕ ಗೆಲ್ಲಲು ಬೇಕಾದ ಎಲ್ಲಾ ಸೌಲಭ್ಯಗಳನ್ನೂ ನೀಡುವುದು. ೨೦೧೨ರ ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ೬ ಮಂದಿಯ ಪೈಕಿ ೪ ಮಂದಿ ಇದರ ಸಹಾಯ ಪಡೆದಿದ್ದರು.೨೦೧೦ರಲ್ಲಿ ಲಿಯಾಂಡರ್ ಪೇಸ್ ಮತ್ತು ವಿಶ್ವನಾಥನ್ ಆನಂದ್ ಸಹ ಇದರ ನಿರ್ದೇಶಕ ಮಂಡಳಿಯ ಸದಸ್ಯರಾದರು. ವೀರೇನ್ ರಸ್ಕಿನ್ಹಾ ಭಾರತ ಹಾಕಿ ತಂಡದ ಮಾಜಿ ನಾಯಕ ,ಇವರು ಇದರಲ್ಲಿ ಪ್ರಸ್ತುತ ಸಿ.ಇ.ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.